ಸರಿ ಸುಮಾರು ಎರಡೂವರೆ ಸಾವಿರ ವರ್ಷದ ಹಿಂದೆ ಗ್ರೀಕ್ ದೇಶದ ಅಥೆನ್ಸ್ ನಗರದ ನಾಗರೀಕನೊಬ್ಬ ಜನ ಜೀವನವು ಧರ್ಮದ ಕಪಿಮುಷ್ಠಿಯಲ್ಲಿ ಸಿಲುಕಿ, ವಿಕಾಸಕಾಣದೆ, ಕ್ರಮೇಣ ವಿಶ್ವಾಸ ಕಳೆದುಕೊಂಡು, ಅನೈತಿಕತೆ, ಸ್ವೇಚ್ಛಾಚಾರ, ಅನಾಚಾರ ತಲೆ ಎತ್ತಿದ ವಿಷಮ ಪರಿಸ್ಥಿತಿಯಲ್ಲಿ ಅದಕ್ಕೆ ಕಾರಣಗಳನ್ನು ಹುಡುಕಿ ಸಾರ್ಥಕ ಜೀವನಕ್ಕೆ ಇರಬೇಕಾದ ಜೀವನ ದೃಷ್ಟಿಯನ್ನು ಜನರಿಗೆ ತಿಳಿಸಿಕೊಟ್ಟಿದ್ದಕ್ಕೆ ಆತನನ್ನು ಧರ್ಮವಿರೋಧ ಪ್ರಚಾರದ ಆಪಾದನೆಗೆ ಗುರಿಪಡಿಸಿ ವಿಶಪ್ರಾಶನ ಮಾಡಿಸಲಾಗುತ್ತದೆ; ಅದಕ್ಕೆ ಮುನ್ನ ಕೊನೆಯ ಅವಕಾಶನೀಡಿ, ತನ್ನೆಲ್ಲ ವಿಚಾರಗಳನ್ನು ಹಿಂಪಡೆದು ಅವು ತಪ್ಪೆಂದು ಹೇಳುವುದಾದರೆ ಜೀವದಾನ ಮಾಡುವುದಾಗಿ ಅಂದಿನ ಆಡಳಿತ ಶಾಹಿ ಹೇಳಿತು. ಅದನ್ನು ಆತ ನಿರಾಕರಿಸಿ "ನನ್ನ ಸಾವಿನಿಂದ ನಾನು ಕಂಡ ಸತ್ಯ ಉಳಿಯಲಿ" ಎಂದು ತಾನೇ ಸ್ವಯಂ ವಿಷವನ್ನು ಸೇವಿಸುತ್ತಾನೆ.
ಈತನ ಹೆಸರು ಸಾಕ್ರೆಟಿಸ್; ಕ್ರಿ.ಪೂ. 469-399 ರ ಅವಧಿಯಲ್ಲಿ ಗ್ರೀಸ್ ದೇಶದ ಅಥೆನ್ಸ್ ನಲ್ಲಿ ಜೀವಿಸಿದ್ದ ಒಬ್ಬ ಶ್ರೇಷ್ಠ ತತ್ವ ಜ್ಞಾನಿ. ಸತ್ಯವಾದಿ,ನಿಷ್ಟುರವಾದಿಯಾಗಿದ್ದ ಆತ, ಗ್ರೀಕ್ ಸಮಾಜ ವಿಷಮ ಘಟದಲ್ಲಿದ್ದಾಗ, ಅಲ್ಲಿನ ಅನೈತಿಕ, ಸ್ವೇಚ್ಛಾಚಾರದ ಜೀವನ ಕ್ರಮವನ್ನು ಖಂಡಿಸಿ, ಒಂದು ಆರೋಗ್ಯಕರವಾದ ಸಮಾಜಕ್ಕಿರಬೇಕಾದ, ಗುಣ, ವಿಚಾರ, ಆಚಾರ, ದಿಕ್ಕು, ಧ್ಯೇಯಗಳನ್ನು ಗುರುತಿಸಿ ಸಾರಿದವನು. “ಆತ್ಮವಿಮರ್ಶೆವಿಲ್ಲದ ಅವೈಚಾರಿಕ ಜೀವನ ಕ್ರಮವು ಬಾಳಲು ಯೋಗ್ಯವಾದುದಲ್ಲ” ಎಂಬ ತತ್ವ ಇವನದು. ಸಾಕ್ರಟೀಸ್ ಎಲ್ಲರಿಗೂ ಒಬ್ಬ ವಿಲಕ್ಷಣ ವ್ಯಕ್ತಿಯಂತೆ ಕಾಣುತ್ತಿದ್ದ; ತನ್ನ ಕಟು ವಿಮರ್ಶೆಯ ಮಾತುಗಳಿಂದ ದುರ್ಮಾರ್ಗದಲ್ಲಿದ್ದವರು ಯಾರೇ ಆಗಿರಲಿ, ಎಂಥಾ ಪ್ರಭಾವಿ ರಾಜಕೀಯ ನಾಯಕರಿರಲಿ, ಆಡಳಿತ ಸೂತ್ರಧಾರಿಗಳಾಗಿರಲಿ, ಸಮಾಜದ ಪ್ರತಿಷ್ಠಿತ ವ್ಯಕ್ತಿಗಳಾಗಿರಲಿ ಅವರನ್ನು ತನ್ನ ವಿಚಾರ ವಿಮರ್ಶೆಗೆ ಒಳಪಡಿಸದೆ ಇರುತ್ತಿರಲಿಲ್ಲ. ಆತ ನಿರ್ಭೀಡೆಯಿಂದ ತಪ್ಪನ್ನು ತಪ್ಪೆಂದು ಕಡ್ಡಿ ಮುರಿದಂತೆ ಹೇಳುತ್ತಿದ್ದ. ಸಮಾಜದ ಮೌಡ್ಯವನ್ನು ದಾಕ್ಷಿಣ್ಯವಿಲ್ಲದೆ ತನ್ನ ಪ್ರಖರ ವಿಚಾರಗಳಿಂದ ಬಯಲಿಗೆಳೆಯುತ್ತಿದ್ದ.
ಸಾಕ್ರೆಟಿಸ್ ಧಾರ್ಮಿಕ ವ್ಯಕ್ತಿಯಲ್ಲದಿದ್ದರೂ ಧರ್ಮದ ವಿರುದ್ಧ ಒಡಕು ಮಾತುಗಳನ್ನಾಡುತ್ತಿರಲಿಲ್ಲ. ಅಥೆನ್ಸ್ ನ ನಗರದ ದೇವತೆಗಳಿಗೆ ಕೇವಲ ಸೌಜನ್ಯಕ್ಕಾಗಿ ಸೇವೆ ಸಲ್ಲಿಸುತ್ತಿದ್ದ, ಹಾಗೂ ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳುತ್ತಿದ್ದ. ಬಾಹ್ಯ ವಿಷಯಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಮೊದಲು ‘‘ನಿನ್ನನ್ನು ನೀನು ತಿಳಿ’’ ಎಂಬುದು ಅವನ ನಂಬಿಕೆಯಾಗಿತ್ತು. ಎಲ್ಲಾ ಅಧ್ಯಯನಗಳಿಗಿಂತ ಮನುಷ್ಯನ ಕುರಿತ ಅಧ್ಯಯನ ಮತ್ತು ಸಮಾಜದಲ್ಲಿ ಅವನು ಹೇಗೆ ಬಾಳಬೇಕೆಂದು ತಿಳಿಯುವುದೇ ಅತ್ಯಂತ ಮಹತ್ವದ ಅಧ್ಯಯನವೆಂದು ಅವನು ಸಾರಿದನು. ಟೀಕೆಗೊಳಗಾದ ಬದುಕು, ಬದುಕಲು ಯೋಗ್ಯವಲ್ಲ ಎಂದನು. ಧಾರ್ಮಿಕತೆಯೇ ಇಲ್ಲದೆ ನೀತಿವಂತಿಕೆ ಸಾಧ್ಯವಿಲ್ಲವೆ? ಎಂದು ಸಾಕ್ರೆಟಿಸ್ ಪ್ರಶ್ನಿಸಿದನು. ದೇವರ ಕಲ್ಪನೆಯೇ ಇರದೆ ನೈತಿಕತೆ ಇರಲು ಸಾಧ್ಯವಿಲ್ಲವೇ? ಎಂದು ಕೇಳಿದನು. ಧರ್ಮಮುಕ್ತ, ನೈತಿಕ ಸಂಹಿತೆಯುಕ್ತ ನಾಗರಿಕತೆಯ ಚಿಂತನಾ ಸ್ವಾತಂತ್ರ್ಯವನ್ನು ಉಳಿಸಲು ಸಾಧ್ಯವೆ ಎಂದು ಪ್ರಶ್ನಿಸಿದನು. ಜ್ಞಾನವೇ ಅತ್ಯುತ್ತಮ ಮತ್ತು ಅಜ್ಞಾನವೇ ವ್ಯಸನವೆಂದನು. ಅತ್ಯುತ್ತಮವಾದದ್ದೆ ಸಂತೋಷ. ಅದಕ್ಕೆ ಮೂಲವೇ ಜ್ಞಾನ ಎಂಬುದು ಅವನ ನಂಬಿಕೆಯಾಗಿತ್ತು.
ಸಾಕ್ರೆಟಿಸ್ ಪ್ರಜಾಪ್ರಭುತ್ವದ ವಿರೋಧಿಯಾಗಿದ್ದು, ಶ್ರೀಮಂತ ಪ್ರಭುತ್ವವನ್ನು (ಅರಿಸ್ಟೋಕ್ರಸಿ) ಪ್ರತಿಪಾದಿಸಿದನು. ಜ್ಞಾನ ಮತ್ತು ದಕ್ಷತೆ ಮಾತ್ರ ಅಥೆನ್ಸ್ನ ಸರ್ಕಾರವನ್ನು ಉಳಿಸೀತು ಎಂದನು. ಪ್ರಶ್ನಿಸದೆ ಏನನ್ನು ಸ್ವೀಕರಿಸದಿರುವಂತೆ ಸಾಕ್ರೆಟಿಸ್ ತನ್ನ ಶಿಷ್ಯರಿಗೆ ತಿಳಿಸಿದನು. ಇಷ್ಟಾದರೂ ಅಥೆನ್ಸ್ನ ಬಹುಸಂಖ್ಯಾತರಿಗೆ ಅವನ ವಿಚಾರಗಳು ಕಿರಿಕಿರಿಯುಂಟು ಮಾಡಿದವು. ನೈತಿಕತೆಯನ್ನು ಧರ್ಮದಲ್ಲಿ ಬಿಟ್ಟು ಮನಸಾಕ್ಷಿಯಲ್ಲಿ ಹುಡುಕುವಂತೆ ಅವನು ಹೇಳಿದ್ದು ಅನೇಕರನ್ನು ರೇಗಿಸಿತು. ಇದರಿಂದ ಪ್ರತಿಷ್ಠಿತ ಜನರ ದ್ವೇಷಕ್ಕೆ ಗುರಿಯಾಗುತ್ತಾನೆ. ಸಮಾಜದ ಜನರನ್ನು ಧರ್ಮವಿರೋಧಿ ವಿಚಾರಗಳತ್ತ ಎಳೆದು ದೇವರಲ್ಲಿನ ಜನರ ನಂಬಿಕೆಗಳನ್ನು ಮುರಿಯುತ್ತಿದ್ದಾನೆ ಎಂದು ಆಪಾದಿಸಲಾಗುತ್ತದೆ.
ಸಾಕ್ರೆಟಿಸ್ ಪ್ರಜಾಪ್ರಭುತ್ವದ ವಿರೋಧಿಯಾಗಿದ್ದು, ಶ್ರೀಮಂತ ಪ್ರಭುತ್ವವನ್ನು (ಅರಿಸ್ಟೋಕ್ರಸಿ) ಪ್ರತಿಪಾದಿಸಿದನು. ಜ್ಞಾನ ಮತ್ತು ದಕ್ಷತೆ ಮಾತ್ರ ಅಥೆನ್ಸ್ನ ಸರ್ಕಾರವನ್ನು ಉಳಿಸೀತು ಎಂದನು. ಪ್ರಶ್ನಿಸದೆ ಏನನ್ನು ಸ್ವೀಕರಿಸದಿರುವಂತೆ ಸಾಕ್ರೆಟಿಸ್ ತನ್ನ ಶಿಷ್ಯರಿಗೆ ತಿಳಿಸಿದನು. ಇಷ್ಟಾದರೂ ಅಥೆನ್ಸ್ನ ಬಹುಸಂಖ್ಯಾತರಿಗೆ ಅವನ ವಿಚಾರಗಳು ಕಿರಿಕಿರಿಯುಂಟು ಮಾಡಿದವು. ನೈತಿಕತೆಯನ್ನು ಧರ್ಮದಲ್ಲಿ ಬಿಟ್ಟು ಮನಸಾಕ್ಷಿಯಲ್ಲಿ ಹುಡುಕುವಂತೆ ಅವನು ಹೇಳಿದ್ದು ಅನೇಕರನ್ನು ರೇಗಿಸಿತು. ಇದರಿಂದ ಪ್ರತಿಷ್ಠಿತ ಜನರ ದ್ವೇಷಕ್ಕೆ ಗುರಿಯಾಗುತ್ತಾನೆ. ಸಮಾಜದ ಜನರನ್ನು ಧರ್ಮವಿರೋಧಿ ವಿಚಾರಗಳತ್ತ ಎಳೆದು ದೇವರಲ್ಲಿನ ಜನರ ನಂಬಿಕೆಗಳನ್ನು ಮುರಿಯುತ್ತಿದ್ದಾನೆ ಎಂದು ಆಪಾದಿಸಲಾಗುತ್ತದೆ.
ವಿಚಾರಣೆಯ ಸಂದರ್ಭದಲ್ಲಿ ಸಾಕ್ರೆಟಿಸ್ ಕೇಳಿದ ಒಂದೇ ಪ್ರಶ್ನೆಯೆಂದರೆ ‘‘ಸಮಾಜವನ್ನು ನಾನು ಭ್ರಷ್ಟಗೊಳಿಸಿರುವೆನೆಂದು ಹೇಳುವುದಾದರೆ ನನ್ನನ್ನು ಭ್ರಷ್ಟಗೊಳಿಸಿದವರು ಯಾರು’’? ಕಾರಾಗೃಹದಲ್ಲಿದ್ದಾಗ ತಪ್ಪಿಸಿಕೊಳ್ಳುವ ಅವಕಾಶವಿದ್ದರೂ, ಅವನು ಹಾಗೆ ಮಾಡಲಿಲ್ಲ. ಕಾರಣ ಸಾಕ್ರೆಟಿಸ್ ತನ್ನ ತತ್ವಗಳಲ್ಲಿ ಅಚಲವಾದ ನಂಬಿಕೆಯನ್ನು ಹೊಂದಿದ್ದು ಮಾತ್ರವಲ್ಲದೆ ಅಮೋಘ ನೈತಿಕ ಶಕ್ತಿಯನ್ನು ಹೊಂದಿದ್ದ. ಕೊನೆಗೆ ಅಂಜದೆ, ಅಳುಕದೆ, ದುಃಖಿಸದೆ, ತನ್ನ 70ನೇ ವಯಸ್ಸಿನಲ್ಲಿ, ಕಾರಾಗೃಹದಲ್ಲಿ ತಾನೇ ಸ್ವಯಂ ಹೆಮ್ಲಾಕ್ ವಿಷವನ್ನು ಕುಡಿದು ಶಾಂತಿಯಿಂದಲೇ ಸಾವನ್ನು ಅಪ್ಪಿಕೊಂಡ.
ಹೀಗೆ ಸಾವನ್ನು ಅಪ್ಪಿಕೊಂಡ ಸಾಕ್ರಟೀಸ್ ಕುರಿತು ಜೂಲಿಯನ್ ಚಕ್ರವರ್ತಿ ಹೀಗೆ ಹೇಳುತ್ತಾನೆ "ಯುದ್ಧದಲ್ಲಿ ಸಾವಿರ ಸೈನಿಕರ ಜಯಿಸಿದ ವೀರನಲ್ಲ ಸಾಕ್ರೆಟಿಸ್; ಆತ ತನ್ನನ್ನು ತಾನು ಗೆದ್ದ ಋಷಿ; ಸಾಫ್ರೊನಿಸ್ಕನ್ಸಿನ ಮಗನಾದ ಸಾಕ್ರಟೀಸ್ ಅಲೆಕ್ಸಾಂಡರನಿಗಿಂತ ಮಹತ್ವದ ಸಾಧನೆ ಮಾಡಿದ್ದಾನೆ".
ಇಂದಿಗೂ ಭಿನ್ನ ಆಶಯಗಳನ್ನೊತ್ತ ಧರ್ಮಗಳು ಜನರ ರಕ್ತವನ್ನು ಹಿಂಡುತ್ತಿವೆ. ಭಾರತದಲ್ಲಿ ಧರ್ಮವೊಂದು ಹರಿಯೇ ಸರ್ವೋತ್ತಮನು; ಹರಿಯಲ್ಲದೆ ಬೇರೆ ದೇವರು ಉತ್ತಮನೆಂದರೆ ಅಥವ ವಿಷ್ಣುವಿಗೆ ಬ್ರಹ್ಮ ರುದ್ರರು ಸಮರು - ಎಂದು ಹೇಳಿದರೆ ಅವರಿಗೆ ಸ್ವರ್ಗ ಪ್ರಾಪ್ತಿಯಾಗುವುದಿಲ್ಲ; ಸ್ತ್ರೀ, ಶೂದ್ರರಿಗೆ ವೇದಾಧಿಕಾರವಿಲ್ಲ ವೆಂದು ಹೇಳಿದರೆ, ಮತ್ತೊಂದು ಅಲ್ಲಾಹುವಲ್ಲದೆ ಬೇರೆ ದೇವರಿಲ್ಲ, ಪ್ರವಾದಿ ಮಹಮ್ಮದರು ಅಲ್ಲಾಹುವಿನ ಕಟ್ಟ ಕಡೆಯ ಪ್ರವಾದಿ. ಅಲ್ಲಾಹುವನ್ನು ಆರಾಧಿಸುವವರು ಮಾತ್ರ ಸ್ವರ್ಗಕ್ಕೆ ಅರ್ಹರು; ಬೇರೆ ದೇವರುಗಳನ್ನು ಆರಾಧಿಸುವವರನ್ನು ನರಕಕ್ಕೆ ತಳ್ಳಲಾಗುತ್ತದೆ ಎಂದು ಸಾರುತ್ತದೆ. ಪರಸ್ಪರ ವಿರುದ್ಧವಾಗಿರುವ ಧರ್ಮಗಳ ಈ ಗೊಂದಲದಲ್ಲಿ ಸಿಕ್ಕ ಅಮಾಯಕ ಜನರು ಯಾವುದು ಸರಿ ಯಾವುದು ತಪ್ಪು ಎಂಬುದನ್ನು ಅರಿಯಲಾಗದೆ, ನಿರ್ಧರಿಸಲಾಗದೆ ಹೋಗಿದ್ದಾರೆ. ಅಸಲಿಗೆ ಈ ದೇವರು, ಆ ಸ್ವರ್ಗ, ನರಕಗಳು ಇವೆಯೋ ಇಲ್ಲವೋ, ಅಂತೂ ಇಂಥ ಧರ್ಮಗಳು ಜನರನ್ನು ತಮ್ಮದಲ್ಲದ ತಪ್ಪಿಗೆ ಇಲ್ಲಿಯೇ ನರಕಕ್ಕೆ ತಳ್ಳುತ್ತಿವೆ.
ಜನರ ಒಳಿತಿಗಾಗಿ ಹುಟ್ಟಿದ ಧರ್ಮಗಳು ತಮ್ಮ ಉಳಿವಿಗಾಗಿ, ವಿಚಾರ ಶೀಲತೆಯನ್ನು ಕೊಂದು, ವಿಚಾರ ಮಾಡುವುದೇ ಮಹಾಪಾಪವೆಂಬ ಮೌಢ್ಯವನ್ನು ಬಿತ್ತಿ, ತನ್ನ ವಿರುದ್ಧ ನಿಲ್ಲುವ ಪ್ರತಿ ಪ್ರಗತಿಪರ ವಿಚಾರವನ್ನು, ವೈಜ್ಞಾನಿಕ ಸತ್ಯವನ್ನು ಹತ್ತಿಕ್ಕಿ, ಭೂಮಿಯ ಸುತ್ತ ಸೂರ್ಯ ಸುತ್ತುತ್ತಿಲ್ಲ, ಭೂಮಿಯೇ ಸೂರ್ಯನ ಸುತ್ತ ಸುತ್ತುತ್ತಿದೆ ಎಂಬ ಸತ್ಯವನ್ನು ಹೇಳಿದವನನ್ನೇ ಜೀವಂತ ಸುಟ್ಟಿವೆ. ಆ ಕಾಲದಿಂದ ಮೊನ್ನೆಯ ಪೆಶಾವರದ ಮಕ್ಕಳ ಮಾರಣ ಹೋಮದವರೆಗೂ ಧರ್ಮವು ಅದೆಷ್ಟೋ ಅಮಾಯಕರನ್ನು, ತತ್ವಜ್ಞಾನಿಗಳನ್ನು ತನ್ನ ಉಳಿವಿಗಾಗಿ ಬಲಿತೆಗೆದು ಕೊಂಡಿದೆ.
ಇನ್ನೆಷ್ಟು ದಿನ ಈ ಅಟ್ಟಹಾಸವನ್ನು ಜಗತ್ತು ಸಹಿಸಬೇಕು?
ಹೀಗೆ ಸಾವನ್ನು ಅಪ್ಪಿಕೊಂಡ ಸಾಕ್ರಟೀಸ್ ಕುರಿತು ಜೂಲಿಯನ್ ಚಕ್ರವರ್ತಿ ಹೀಗೆ ಹೇಳುತ್ತಾನೆ "ಯುದ್ಧದಲ್ಲಿ ಸಾವಿರ ಸೈನಿಕರ ಜಯಿಸಿದ ವೀರನಲ್ಲ ಸಾಕ್ರೆಟಿಸ್; ಆತ ತನ್ನನ್ನು ತಾನು ಗೆದ್ದ ಋಷಿ; ಸಾಫ್ರೊನಿಸ್ಕನ್ಸಿನ ಮಗನಾದ ಸಾಕ್ರಟೀಸ್ ಅಲೆಕ್ಸಾಂಡರನಿಗಿಂತ ಮಹತ್ವದ ಸಾಧನೆ ಮಾಡಿದ್ದಾನೆ".
ಇಂದಿಗೂ ಭಿನ್ನ ಆಶಯಗಳನ್ನೊತ್ತ ಧರ್ಮಗಳು ಜನರ ರಕ್ತವನ್ನು ಹಿಂಡುತ್ತಿವೆ. ಭಾರತದಲ್ಲಿ ಧರ್ಮವೊಂದು ಹರಿಯೇ ಸರ್ವೋತ್ತಮನು; ಹರಿಯಲ್ಲದೆ ಬೇರೆ ದೇವರು ಉತ್ತಮನೆಂದರೆ ಅಥವ ವಿಷ್ಣುವಿಗೆ ಬ್ರಹ್ಮ ರುದ್ರರು ಸಮರು - ಎಂದು ಹೇಳಿದರೆ ಅವರಿಗೆ ಸ್ವರ್ಗ ಪ್ರಾಪ್ತಿಯಾಗುವುದಿಲ್ಲ; ಸ್ತ್ರೀ, ಶೂದ್ರರಿಗೆ ವೇದಾಧಿಕಾರವಿಲ್ಲ ವೆಂದು ಹೇಳಿದರೆ, ಮತ್ತೊಂದು ಅಲ್ಲಾಹುವಲ್ಲದೆ ಬೇರೆ ದೇವರಿಲ್ಲ, ಪ್ರವಾದಿ ಮಹಮ್ಮದರು ಅಲ್ಲಾಹುವಿನ ಕಟ್ಟ ಕಡೆಯ ಪ್ರವಾದಿ. ಅಲ್ಲಾಹುವನ್ನು ಆರಾಧಿಸುವವರು ಮಾತ್ರ ಸ್ವರ್ಗಕ್ಕೆ ಅರ್ಹರು; ಬೇರೆ ದೇವರುಗಳನ್ನು ಆರಾಧಿಸುವವರನ್ನು ನರಕಕ್ಕೆ ತಳ್ಳಲಾಗುತ್ತದೆ ಎಂದು ಸಾರುತ್ತದೆ. ಪರಸ್ಪರ ವಿರುದ್ಧವಾಗಿರುವ ಧರ್ಮಗಳ ಈ ಗೊಂದಲದಲ್ಲಿ ಸಿಕ್ಕ ಅಮಾಯಕ ಜನರು ಯಾವುದು ಸರಿ ಯಾವುದು ತಪ್ಪು ಎಂಬುದನ್ನು ಅರಿಯಲಾಗದೆ, ನಿರ್ಧರಿಸಲಾಗದೆ ಹೋಗಿದ್ದಾರೆ. ಅಸಲಿಗೆ ಈ ದೇವರು, ಆ ಸ್ವರ್ಗ, ನರಕಗಳು ಇವೆಯೋ ಇಲ್ಲವೋ, ಅಂತೂ ಇಂಥ ಧರ್ಮಗಳು ಜನರನ್ನು ತಮ್ಮದಲ್ಲದ ತಪ್ಪಿಗೆ ಇಲ್ಲಿಯೇ ನರಕಕ್ಕೆ ತಳ್ಳುತ್ತಿವೆ.
ಜನರ ಒಳಿತಿಗಾಗಿ ಹುಟ್ಟಿದ ಧರ್ಮಗಳು ತಮ್ಮ ಉಳಿವಿಗಾಗಿ, ವಿಚಾರ ಶೀಲತೆಯನ್ನು ಕೊಂದು, ವಿಚಾರ ಮಾಡುವುದೇ ಮಹಾಪಾಪವೆಂಬ ಮೌಢ್ಯವನ್ನು ಬಿತ್ತಿ, ತನ್ನ ವಿರುದ್ಧ ನಿಲ್ಲುವ ಪ್ರತಿ ಪ್ರಗತಿಪರ ವಿಚಾರವನ್ನು, ವೈಜ್ಞಾನಿಕ ಸತ್ಯವನ್ನು ಹತ್ತಿಕ್ಕಿ, ಭೂಮಿಯ ಸುತ್ತ ಸೂರ್ಯ ಸುತ್ತುತ್ತಿಲ್ಲ, ಭೂಮಿಯೇ ಸೂರ್ಯನ ಸುತ್ತ ಸುತ್ತುತ್ತಿದೆ ಎಂಬ ಸತ್ಯವನ್ನು ಹೇಳಿದವನನ್ನೇ ಜೀವಂತ ಸುಟ್ಟಿವೆ. ಆ ಕಾಲದಿಂದ ಮೊನ್ನೆಯ ಪೆಶಾವರದ ಮಕ್ಕಳ ಮಾರಣ ಹೋಮದವರೆಗೂ ಧರ್ಮವು ಅದೆಷ್ಟೋ ಅಮಾಯಕರನ್ನು, ತತ್ವಜ್ಞಾನಿಗಳನ್ನು ತನ್ನ ಉಳಿವಿಗಾಗಿ ಬಲಿತೆಗೆದು ಕೊಂಡಿದೆ.
ಇನ್ನೆಷ್ಟು ದಿನ ಈ ಅಟ್ಟಹಾಸವನ್ನು ಜಗತ್ತು ಸಹಿಸಬೇಕು?